ಲಾಲಿ ಹಾಡು ಶುರು ಮಾಡಿದರಂತೂ ಹಟ ಮಾಡುತ್ತಿದ್ದ ಕೂಸು ಇದೇನಾ ಎನ್ನುವಂತಾಗುತ್ತದೆ. ರಚ್ಚೆ ಹಿಡಿದು ಅಳುವ ಮಗುವನ್ನು ಲಾಲಿಸಿ ಸಮಾಧಾನಿಸುವುದು, ಹಾಗೇ ಮಲಗಿಸುವುದು ಒಂದು ನವಿರಾದ ಭಾವನಾತ್ಮಕ ಎಳೆಯ ಕುಸುರಿ ಕೆಲಸ.
ತಂದೆ- ತಾಯಿಯ ಅಮಿತ ವಾತ್ಸಲ್ಯದ ನೆರಳಿನಲ್ಲಿಯ ಸತ್ಯವನ್ನು ನುಡಿಯುತ್ತಾ, ತಾ ಬಂದು ತುಂಬಿದ ಮನೆಯ, ತನ್ನ ಪತಿಯ ಮೇಲ್ಮೆಯನ್ನೂ ಮರೆಯುವಂತಿಲ್ಲವಲ್ಲ! ಆದರೆ ತಾಯ ಕರುಳಿನ ನಂಟು ಅದಕ್ಕೂ ಮಿಕ್ಕಿದ್ದು. ಅಂತಲೇ ಆಕೆ ಹೇಳೋದು- ಹೊಟ್ಟೀಯ ಕಂದ ಮಾಣಿಕ, ಅದು ಇವೆಲ್ಲ ಬಂಧಕ್ಕಿಂತಲೂ ಮಿಗಿಲು ಅಂತ.
ತನ್ನ ಮುದ್ದು ಕಂದ ಆಡುವಲ್ಲಿ ಕಡಲುಕ್ಕಿ, ಮುತ್ತುಗಳು ಉದುರತ್ತಾವಂತೆ-
“ಕಂದೆಲ್ಲಿ ಆಡ್ಯಾನ ಕಡಲೆಲ್ಲಿ ಉಕ್ಯಾವ
ಕಡಲ ಮುತ್ತೆಲ್ಲಿ ಉದುರ್ಯಾವ
ಕಂದವ್ವನ ಕಡಗ ಕಂಡವರು ಕೊಡಿರಮ್ಮ”||
ಆಕೆಯ ಕಂದ ಪೂರ್ಣಚಂದ್ರನೇ ಆ ತಾಯಿಗೆ. ಅದಕ್ಕೇ ಆಕೆಯ ಮಗು ಆಡುವಲ್ಲಿ, ಹುಣ್ಣಿಮೆ ಚಂದಿರನ ಕಂಡು ಕಡಲು ಉಕ್ಕುವಂತೆ ಇಲ್ಲಿಯೂ ಉಕ್ಕಿ ಬರುತ್ತದಂತೆ. ಅದರ ಜೊತೆಗೆ ಮುತ್ತೂ ಹರಿದು ಬಂದು ಅಲ್ಲೆಲ್ಲಾ ಚಲ್ಲುವರೆದು ಸುರೀಯುತ್ತಾವಂತೆ. ಅದ್ಯಾವ ಲೆಕ್ಕ ಆಕೆಗೆ? ತನ್ನ ಕಂದನ ಕಡಗದ್ದೇ ಚಿಂತೆ. ಅಲ್ಲೆಲ್ಲೋ ಬಿದ್ದು ಹೋಯ್ತದು, ಸಿಕ್ರೆ ಕೊಡಿ ಅಂತ ಕೇಳುತ್ತಾಳೆ. ಕಡಲ ಮುತ್ತಿನ ರಾಶಿಗಿಂತಲೂ ಕಂದನ ಕಡಗ ಅಮೂಲ್ಯ ಆಕೆಗೆ. ಈ ಅಸೀಮ ವಾತ್ಸಲ್ಯಕ್ಕೆ ಯಾವ ಹೆಸರು ಕೊಡಲಾದೀತು? ಯಾವ ಪಾಂಡಿತ್ಯವೂ ಉತ್ತರಿಸಲಾಗದ ಒಗಟು ಇದು.
ಮನೆತುಂಬ ಸುಳಿದಾಡುತ್ತ, ಆಡುವ ತನ್ನ ಕೂಸು ಮನಸ್ಸಿಗೆ ನೀಡುವ ತಂಪಾದ ಸುಖದಲ್ಲಿ ತೇಲಿ ಬಲು ಛಂದದ ಮಾತೊಂದು ಹೇಳ್ತಾಳೆ ಆಕೆ ಇಲ್ಲಿ –
“ಕೂಸಾಡೋ ಮನಿಗೆ ಬೀಸಣಿಕೆ ಯಾತಕ
ಕೂಸು ಕಂದಮ್ಮ ಒಳ ಹೊರಗ ….
ಒಳಹೊರಗ ಆಡಿದರ ಬೀಸಣಿಕೆ ಗಾಳಿ
ಸುಳಿದಾವ ||”
ತನ್ನ ಕಂದ ಆಡೋ ಮನೇಲಿ ಅದು ಹೇಗೆ ಬಿಸಿಲಿನ ಝಳ ತಾಕೀತು? ಕೂಸು ಒಳ ಹೊರಗ ಸುಳಿದಾಡಿದ್ರನೇ ತಂಗಾಳಿ ಸುಳೀತದಂತೆ ಅಲ್ಲಿ. ಇನ್ನು ಬೀಸಣಿಕೆಗೆ ಅಲ್ಲೇನು ಕೆಲಸ?
ಹೀಗೇ ಈ ಹಿತವೆನಿಸುವ ಲಾಲಿ ಹಾಡಿನ ಆರಂಭದ ‘ಲೊಳ್ ಲೊಳ್ ಲಾಯಿ ಲಾಲಿ ಲಾಲಿ’ ಯ ಮಧುರ ಲಯಬದ್ಧ ನಾದಕ್ಕೆ, ಆ ಹಾಡುಗಳ ಮಾಯೆಗೆ ಮಗು ತನ್ನ ಹಟ ನಿಲ್ಲಿಸಿ ಆಟಕ್ಕೆ ಇಳಿದರೆ ಕಣ್ಣಿಗೆ ಹಬ್ಬ. ಹಾಗೆಯೇ ಮೋಡಿಗೊಳಗಾಗಿ ನಿದ್ದೆಗೆ ಜಾರಿದರೆ, ಕಿರುನಗು ತುಟಿಯ ಮೇಲಾಡುವ, ಹಾಯಾಗಿ ಮಲಗಿದ ಕಂದನನ್ನ ನೋಡುವುದೇ ಒಂದು ರಮ್ಯ ನೋಟ!
ಈ ಲಾಲಿ ಪದಗಳಿಗೆ ಯಾವುದೇ ಕಟ್ಟುಪಾಡಿನ ಗೋಜಿಲ್ಲದೇ ಮುದ ನೀಡುವಂತೆ ಹಿಗ್ಗಿಸಲೂ ಬಹುದು – ಕುಗ್ಗಿಸಲೂಬಹುದು. ಆ ಜಾಣ್ಮೆ, ಹಿಡಿತ ಉಳ್ಳ ಆ ತಾಯಿ ಯಾವ ಪಂಡಿತರಿಗೆ ಕಡಿಮೆ? ಮಗು ಗಂಡಾದರೆ ಅವನು, ಹೆಣ್ಣಾದರೆ ಅವಳು ಅಂತ ಸರಾಗವಾಗಿ ಸೇರಿಸಿ, ರಾಜ, ರಾಣಿಯರನ್ನಾಗಿಸಿ ಹಾಡುವ ಗತ್ತು ಬಲ್ಲಳಾಕೆ. ಒಬ್ಬ ಸರಳ, ಸಹಜ ಕವಿ ಅಲ್ಲವೇ ಆಕೆ?
ಅಂತೆಯೇ ಮಗು ಒಂದು ಎರಡೂವರೆ- ಮೂರು ತಿಂಗಳಿನದಾದರೆ ಈ ಲಾಲಿ ಪದಗಳ ರೂಪ ಸ್ವಲ್ಪವೇ ಬದಲಿಸಿ ಹೊಸ ಥರದ, ಹೊಸ ಪ್ರಾಸಗಳ ಪ್ರಯೋಗ ಮಾಡಿ ಮಗುವನ್ನು ರಂಜಿಸುತ್ತಾಳೆ.(ಆದರೆ ಲಾಲಿ ಪದಗಳ ಹಾಡುವಿಕೆ ಅನವರತ.)ಅಲ್ಲಿ ಒಂದು ವೈಜ್ಞಾನಿಕ ಹಿನ್ನೆಲೆಯೂ ಇರುತ್ತೆ ಎಂಬುದನ್ನು ಮರೆಯುವಂತಿಲ್ಲ.
ಮಗೂನ ಹಾಸಿಗೆ ಮೇಲೆ ಅಥವಾ ತನ್ನ ಕಾಲುಗಳ ಮೇಲೆ ಮಲಗಿಸಿ, ಅದರ ಎರಡೂ ಕಾಲು ಜೋಡಿಸಿ ನೆಟ್ಟಗೆ ಮಾಡಿ, ಮಗುವಿನ ಜೋಡಿ ಕಾಲುಗಳ ಮೇಲೆ ಅಡ್ಡಡ್ಡಲಾಗಿ ಕೈ ಹಿಂದೆ ಮುಂದೆ ಆಡಿಸುತ್ತಾ ಈ ಪ್ರಾಸವನ್ನು ಹೇಳ್ತಾಳೆ-
“ಸಾಡೇಮಾಡೇ ಬಾಪುರೇ ಬಾಪುರೇ
ಬಾಪುರಾಯಾ ಬಂದಿದ್ದಾ ಬಂದಿದ್ದಾ
ಹವಳದ ಸರಾ ತಂದಿದ್ದಾ ತಂದಿದ್ದಾ
ಮಾಡದಾಗ ಇಟ್ಟಿದ್ದಾ ಇಟ್ಟಿದ್ದಾ
ನಾಯಿ ಬಂದ ಒಯ್ತೋ ಒಯ್ತೋ
ಕಂದಮ್ಮ ಎದ್ದು ಹಿಂದ ಓಡ್ತೋ||”
ಮಗು ಆ ಲಯಕ್ಕೆ ಮರುಳಾಗಿ ಕೇಕೆ ಹಾಕಿ ನಗುತ್ತ, ಕಾಲು ನೆಟ್ಟಗೆ ಚಾಚುತ್ತೆ. ಅಮ್ಮನ ಕೈಯಂತೂ ಕಾಲುಗಳನ್ನು ಹಿಡದೇ ಇರುತ್ತೆ. ಇದರಿಂದ ಎಳೆ ಕಾಲು ಸೊಟ್ಟಗಾಗದೇ ನೆಟ್ಟಗಾಗ್ತದೆ ಅಂತ ಅವಳ ಎಣಿಕೆ. ಅದು ನಿಜವೇ. ಮಗುವಿಗೆ ಸ್ನಾನ ಮಾಡಿಸುವಾಗಲೂ ಕೂಸಿನ ಕಾಲುಗಳನ್ನು ಜೋಡಿಸಿ ನೆಟ್ಟಗೆ ಮಾಡಿ ಮಸಾಜ್ ಮಾಡೋದು ಇದಕ್ಕೇ.
ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮಗುವನ್ನು ಮೆಲ್ಲಗೆ ತನ್ನ ತೊಡೆಯ ಮೇಲೆ ಅಥವಾ ತನ್ನ ಚಾಚಿದ ಕಾಲುಗಳ ಮೇಲೆ ಕೂಡಿಸಿಕೊಂಡು ಅದರ ಬೆನ್ನು ಅಥವಾ ಕತ್ತಿನ ಹಿಂದೆ ಒಂದು ಕೈ ಇಟ್ಟು ಮುಂದೆ ಒಂದು ಕೈ ಆಸರೆ ಕೊಟ್ಟು ಹಿಂದೆ ಮುಂದೆ ತೂಗಾಡಿಸುತ್ತ ರಾಗವಾಗಿ ಈ ಪ್ರಾಸ ಹೇಳುತ್ತಾಳೆ –
“ಆನಿ ಬಂತೊಂದಾನಿ
ಇದ್ಯಾವೂರ ಆನಿ
ವಿಜಾಪುರ ಆನಿ
ಇಲ್ಲಿಗ್ಯಾಕ ಬಂತು
ಹಾದಿ ತಪ್ಪಿ ಬಂತು
ಹಾದಿಗೊಂದ ದುಡ್ಡು
ಬೀದಿಗೊಂದ ದುಡ್ಡು
ಅದs ದುಡ್ಡು ತಗೊಂಡು
ಸೇರ ಖೊಬ್ರಿ ತಂದು
ಲಟಾ ಲಟಾ ಮುರದು
ಎಲ್ಲಾರಿಗೂ ಕೊಟ್ಟು
ಕಂದಮ್ಮನ ಬಾಯಾಗ ಬಟ್ಟು”
ಅಂತ ಮುಗಿಸುತ್ತಾಳೆ.
ಇಲ್ಲೊಂದು ಗಮನಿಸಬೇಕಾದ ಸಂಗತಿ ಇದೆ. ಮಗೂನ ಹಿಂದೆ ಮುಂದೆ ತೂಗಾಡಿಸುವಾಗ ಕಾಲು ನೆಲಕ್ಕೆ ತಾಗಿದರೆ ಮಗು ನೆಟ್ಟಗೆ ನಿಲ್ಲಲು ಪ್ರಯತ್ನಿಸುತ್ತದೆ ಅಂತ ಲೆಕ್ಕ. ಮತ್ತು ಕೂಸು ಹಾಗೇ ಮಾಡುತ್ತದೆ. ಹೀಗೆಯೇ ಮಕ್ಕಳ ಅನುಕರಣ, ಗ್ರಹಣ ಶಕ್ತಿ ಹೆಚ್ಚಿಸಲು ಅನೇಕ ಪ್ರಾಸಗಳಿವೆ. ಇವೂ ಒಂಥರದ ಶಿಶು ಪ್ರಾಸಗಳೇ, ಆದರೆ ತಾಯಿ ಮಾಡಿದ್ದು.
ಹೀಗೆ ಈ ಜಾನಪದ ಸಾಹಿತ್ಯದಲ್ಲಿ ಲಾಲಿ ಹಾಡುಗಳ, ಶಿಶು ಪ್ರಾಸಗಳ ಖಜಾನೆ ಮುಗಿಯಲಾರದಷ್ಟು ಶ್ರೀಮಂತ. ಇವೆಲ್ಲಾ ಮಹಿಳೆಯರ ರಚನೆಗಳೇ. ಅದಕ್ಕೆ ದ.ರಾ.ಬೇಂದ್ರೆಯವರು ಹೇಳಿದ್ದಾರೆ – ಜಾನಪದ ಗರತಿಯರೇ ನಿಜವಾದ ಅರ್ಥದಲ್ಲಿ ಕವಿಗಳು. ಋಷಿಗಳು ಅವರು” ಅಂತ.
ಜೋಗುಳ ಪದಗಳು :
“ಆ ಊರು ಈ ಊರು ಜೋಗಿ
ಜಂಗಮನೂರು
ನೀರಿಲ್ಲದೂರು ನರಗುಂದ
ನರಗುಂದ ದೇಸಾಯಿ ಹಾಲಿಲೇ ಮೋರೆ
ತೊಳೆದಾನ ||”
“ಅಳುವ ಕಂದನ ತುಟಿಯು
ಹವಳದ ಕುಡಿ ಹಾಂಗೆ
ಕುಡಿ ಹುಬ್ಬು ಬೇವಿನೆಸಳಾಂಗ
ಎಸಳಾಂಗ ಕಣ್ಣೋಟ ಶಿವನ ಕೈಯಲಗು
ಹೊಳೆಧಾಂಗ”||
“ಬಾಳೆಲ್ಲಿ ಆಡ್ಯಾನ ಬ್ಯಾಳೆಲ್ಲಿ ಛಲ್ಯಾವ
ಭಾಳ ಮುತ್ತೆಲ್ಲಿ ಉದುರ್ಯಾವ
ಬಾಳಯ್ಯನ ಭಾಳ ಕಂಡವರು ಕೊಡಿರಮ್ಮ||”
ನಿದ್ದಿ ಬಂದದ ನನ್ನ ಬುದ್ಧ್ಯುಳ್ಳ ಕೂಸಿಗೆ
ಮುದ್ದು ರಂಗಯ್ಯ ಬಾರಯ್ಯ
ಬಾರಯ್ಯ ಕೂಸಿಗೆ ಭಂಗಾರ ನಿದ್ದೆ ತಾರಯ್ಯ||
ಜನಪದ ಸಾಹಿತ್ಯದಲ್ಲಿ ಮಾತೃಪ್ರೇಮ
ಭಾರತೀಯ ಹೆಣ್ಣುಮಕ್ಕಳಿಗೆ ತಮ್ಮ ತಾಯಿಯ ಬಗ್ಗೆ, ತಾನು ಹುಟ್ಟಿದ ಮನೆಯ ಬಗ್ಗೆ ಅಪಾರವಾದ ಮಮಕಾರವಿರುತ್ತದೆ. ಆ ಮಮಕಾರದ ಮೂರ್ತರೂಪವೇನೋ ಎನಿಸುವ ಈ ಗೀತೆಗಳು ತಮ್ಮ ಮಾಧುರ್ಯದಿಂದ ನಮ್ಮನ್ನು ಮಂತ್ರಮುಗ್ಧಗೊಳಿಸುತ್ತವೆ. ಅವರ ಸರಳ ಭಾಷೆ, ಸರಳವಾದ ಭಾವ - ಅದನ್ನು ಅಷ್ಟೇ ಸರಳವಾಗಿ ವ್ಯಕ್ತಗೊಳಿಸುವ ರೀತಿ ನಿಜಕ್ಕೂ ತುಂಬ ಸೊಗಸಾಗಿರುತ್ತದೆ. ಅಂತಹ ಮಧುರ ಅಭಿವ್ಯಕ್ತಿಯ ಕೆಲ ಉದಾಹರಣೆಗಳು :
"ಹಾಲುಂಡ ತವರೀಗಿ ಏನೆಂದು ಹಾಡಲೆ
ಹೊಳೆದಂಡಿಯಲಿರುವ ಕರಕೀಯ ಕುಡಿಯಂಗ
ಹಬ್ಬಲೆ ಅವರ ರಸಬಳ್ಳಿ"
ತನ್ನ ತವರನ್ನು ಕುರಿತ ಹೆಣ್ಣೊಬ್ಬಳ ಹಾರೈಕೆಯಿದು. ಸಾಮಾನ್ಯವಾಗಿ, ಗರಿಕೆಯ ಹುಲ್ಲು ಯಾವಾಗಲೂ ಹಸಿರಾಗೇ ಇರುತ್ತದೆ(ನೀರಿನ ಅಭಾವದ ಕಾಲದಲ್ಲೂ). ಇಲ್ಲಿ ಈಕೆ, ತನ್ನ ತವರುಮನೆ 'ಹೊಳೆದಂಡಿಯಲ್ಲಿರುವ ಗರಿಕೆ'ಯ ಹಾಗೆ ಇರಲೆಂದು ಹಾರೈಸುತ್ತಿದ್ದಾಳೆ. ನಿತ್ಯವೂ ನೀರು ಹರಿಯುವ ಹೊಳೆಯ ದಡದಲ್ಲಿರುವ ಗರಿಕೆಯ ಹುಲ್ಲು ಎಂದೆಂದಿಗೂ ಹಸಿರಾಗೇ ಇರುತ್ತದೆಯಲ್ಲವೆ? ತನ್ನ ತವರುಮನೆಯ ಸಿರಿಯೂ ಹಾಗೆಯೇ ನಿತ್ಯ ಹಸಿರಾಗಿರಲೆಂದು ಆಕೆ ಹಾರೈಸುತ್ತಾಳೆ.
"ತವರೂರು ಹಾದೀಲಿ ಕಲ್ಲಿಲ್ಲ ಮುಳ್ಳಿಲ್ಲ
ಸಾಸಿವೆಯಷ್ಟು ಮರಳಿಲ್ಲ, ಬಾನಲ್ಲಿ
ಬಿಸಲೀನ ಬೇಗೆ ಸುಡಲಿಲ್ಲ"
ತನ್ನ ತವರನ್ನು ಕಾಣಲು ಹೊರಟಿರುವ ಹೆಣ್ಣುಮಗಳೊಬ್ಬಳ ಮಾತಿದು. ತವರಿಗೆ ಹೊರಟಿರುವ ಖುಷಿಯಲ್ಲಿ ಆಕೆಗೆ ಹಾದಿಯಲ್ಲಿ ಎದುರಾಗುವ ಕಷ್ಟಗಳ ಪರಿವೆಯೇ ಇಲ್ಲ. ಬಿಸಿಲಿನ ಬೇಗೆಯೂ ಆಕೆಯನ್ನು ಕಾಡಲಿಲ್ಲ.ಆಕೆಗೆ ತನ್ನ ತವರನ್ನು ಕಾಣುವ ಸಂತಸದಲ್ಲಿ ಮಾರ್ಗಮಧ್ಯದ ಈ ಯಾವ ಎಡರು-ತೊಡರುಗಳೂ ಲೆಕ್ಕಕ್ಕೆ ಬರಲಿಲ್ಲ. ಹೀಗಿದೆ ಆಕೆಯ ತವರಿನ ಪ್ರೇಮ.
"ತೊಟ್ಟೀಲ ಹೊತ್ಕೊಂಡು ತೌರ್ಬಣ್ಣ ಉಟ್ಕೊಂಡು
ಅಪ್ಪ ಕೊಟ್ಟೆಮ್ಮೆ ಹೊಡಕೊಂಡು ತೌರೂರ
ತಿಟ್ತತ್ತಿ ತಿರುಗಿ ನೋಡ್ಯಾಳೊ"
ತನ್ನ ಚೊಚ್ಚಲ ಬಾಣಂತನವನ್ನು ಮುಗಿಸಿಕೊಂಡು ತನ್ನ ಗಂಡನ ಮನೆಗೆ ಹೊರಟಿರುವ ಹೆಣ್ಣೊಬ್ಬಳ ಚಿತ್ರಣವನ್ನು ಕೊಡುತ್ತದೆ - ಈ ಗೀತೆ.
ತಾಯಿಯ ಮನೆಯವರು ಕೊಟ್ಟ ಸೀರೆಯನ್ನುಟ್ಟು, ಅಪ್ಪ ಕೊಟ್ಟ ಎಮ್ಮೆಯನ್ನು ಹೊಡಕೊಂಡು ಹೊರಟಿದ್ದಾಳೆ - ಒಂದು ದಿಬ್ಬದ ಮೇಲೆ. ಆ ದಿಬ್ಬದ ಮೇಲೆ ನಿಂತು ತನ್ನ ತವರುಮನೆಯ ಕಡೆಗೆ ಒಮ್ಮೆ ನೋಡುತ್ತಿದ್ದಾಳೆ.. ದಿಬ್ಬವನ್ನು ಇಳಿದುಬಿಟ್ಟರೆ ಮತ್ತೆ ತವರುಮನೆ ಕಾಣಿಸದು, ಅದಕ್ಕೇ ಮುಂದೆ ಹೊರಡುವ ಮುಂಚೆ ಇನ್ನೊಮ್ಮೆ ಎನ್ನುವಂತೆ ತವರನ್ನು ನೋಡುತ್ತಿದ್ದಾಳೆ ಆಕೆ. ಎಷ್ಟು ಸುಂದರವಾದ, ಮನಮುಟ್ಟುವ ನಿರೂಪಣೆ!
ಇನ್ನು, ಆಕೆಗೆ ತನ್ನ ತಾಯಿಯ ಬಗೆಗಿರುವ ಪ್ರೀತಿ, ಭಕ್ತಿ ಅಷ್ಟಿಷ್ಟಲ್ಲ,
"ತೌರು ಮನೆಯ ಜ್ಯೋತಿ ತಣ್ಣಾಗೆ ಉರಿಯವ್ವ
ತಣ್ಣೀರಾಗೆ ಮಿಂದು ಮಡಿಯುಟ್ಟು ಬರುತೀನಿ
ತಣ್ಣಾಗೆ ಉರಿಯೆ ಜಗಜೋತಿ"
ಇಲ್ಲಿ ಆಕೆ ತನ್ನ ತಾಯಿಯನ್ನು ತವರಿನ ಮನೆಯ ಜ್ಯೋತಿ ಎಂದು ಕರೆದಿರುವುದು ಎಷ್ಟು ಅರ್ಥಪೂರ್ಣವಾಗಿದೆ ಅಲ್ಲವೇ?
"ಕಾಶೀಗೆ ಹೋಗಲಿಕೆ ಏಸೊಂದು ದಿನ ಬೇಕು
ತಾಸ್ಸೊತ್ತಿನ ಹಾದಿ ತೌರೂರು ಮನೆಯಲ್ಲಿ
ಕಾಶಿ ಕುಂತವಳೆ ಹಡೆದವ್ವ"
"ಎಲ್ಲೋ ಇರುವ ಕಾಶಿಗೆ ಹೋಗಬೇಕೆಂದರೆ ಎಷ್ಟೋ ದಿನಗಳು ಬೇಕು. ಅಲ್ಲಿಗೆ ಹೋಗಲು ನನ್ನಿಂದ ಆಗುತ್ತದೋ ಇಲ್ಲವೋ, ಆದರೆ ತವರಿನ ಮನೆಯಂತೂ ಒಂದು ತಾಸು ಹೊತ್ತಿನ ಹಾದಿಯಷ್ಟೇ. ಅಲ್ಲಿಗೆ ಹೋದರೆ ಸಾಕು, ಅಲ್ಲಿ ನನ್ನ ತಾಯಿ ಇರುತ್ತಾಳೆ..." ಇಲ್ಲಿ ತನ್ನ ತಾಯಿಯನ್ನು ಕಾಶಿಯಂತಹ ಪುಣ್ಯಕ್ಷೇತ್ರಕ್ಕೆ ಹೋಲಿಸಿದ್ದಾಳೆ - ಈ ಹೆಣ್ಣುಮಗಳು, ಎಂತಹ ಉನ್ನತವಾದ ಕಲ್ಪನೆ.!
"ಯಾರು ಆದರೂ ಹೆತ್ತ ತಾಯಂತೆ ಆದಾರೋ
ಸಾವಿರ ಸೌದೆ ಒಲೆಯಲ್ಲಿ ಉರಿದಾರೂ
ದೀವಿಗೆಯಂತೆ ಬೆಳಕುಂಟೆ"
ಎಂತಹ ಅದ್ಭುತವಾದ ಹೋಲಿಕೆಯನ್ನು ಕೊಟ್ಟು ತಾಯಿಯ ಬಗೆಗೆ ಹೇಳುತ್ತಾಳೆ ಈ ಮಾತನ್ನು - "ಯಾವ ಬಂಧುಗಳು, ಆಪ್ತರೇ ಇದ್ದರೂ ಅವರಲ್ಲಿ ಯಾರೂ ಹೆತ್ತ ತಾಯಿಯನ್ನು ಸರಿಗಟ್ಟಲಾರರು. ತಾಯಿಗೆ ತಾಯಿಯೇ ಸಾಟಿ.
ಸಾವಿರ ಸೌದೆ ಉರಿಯಬಹುದು, ಅದು ಕೂಡ ಬೆಳಕು ಕೊಡುತ್ತದೆ. ಆದರೆ ಒಂದು ದೀಪವು ಕೊಡುವ ಸೌಮ್ಯವಾದ ಬೆಳಕಿಗೆ ಈ ಬೆಳಕು ಸರಿಹೋದೀತೆ?" ಇಲ್ಲ, ಖಂಡಿತ ಇಲ್ಲ. ಇಲ್ಲಿ, ಇನ್ನೊಂದು ರೀತಿಯಲ್ಲಿ ಅರ್ಥೈಸಬಹುದು. ದೀಪವು ಶುಭಸೂಚಕ. ಉರಿಯುವ ಸೌದೆಯಾದರೋ ಆಮಂಗಳವನ್ನು ಸೂಚಿಸುತ್ತದೆ.
"ಮೊಲೆಹಾಲ ಕುಡಿಸಿದ್ದಿ ಕಲಸಕ್ರಿ ತಿನಿಸಿದ್ದಿ
ಬೆಳದಿಂಗ್ಳಿಗು ಮರಿಯ ಹಿಡಿದಿದ್ದಿ ನಿನ ಸೆರಗ
ಅಳುವುದೀಗೆಷ್ಟು ಹಡೆದವ್ವ"
ಯಾವುದೋ ದುಃಖದ ಸಂದರ್ಭದಲ್ಲಿ ಹೇಳುತ್ತಿರುವ ಮಾತಿನಂತಿದೆ - ಈ ಗೀತೆ. ತಾಯಿಯ ಪ್ರೇಮದ ಪರಾಕಾಷ್ಟತೆಯನ್ನು ಈ ಸಾಲುಗಳು ಕಣ್ಣಿಗೆ ಕಟ್ಟಿಕೊಡುತ್ತವೆ.
"ಬೆಳದಿಂಗ್ಳಿಗು ಮರಿಯ ಹಿಡಿದಿದ್ದಿ ನಿನ ಸೆರಗ" -- ತಾಯಿಗೆ ತನ್ನ ಮಗುವಿನ ಮೇಲೆ ಅದೆಷ್ಟು ಪ್ರೀತಿ ಎಂದರೆ, ಬೆಳದಿಂಗಳ ಕಿರಣಗಳು ಸೋಕಿ ಎಲ್ಲಿ ತನ್ನ ಕಂದನ ಮೊಗವು ಕಂದುವುದೋ ಎಂದು ಆಕೆ ತನ್ನ ಸೆರಗನ್ನು ಮರೆಹಿಡಿಯುತ್ತಾಳೆ. ತನ್ನ ಮಗುವಿಗೆ ಅಷ್ಟು ಮಾತ್ರವೂ ನೋವಾಗಬಾರದೆಂದು ಆಕೆಯ ಕಾಳಜಿ. ಅಂತಹ ಅನನ್ಯ ಮಾತೃಪ್ರೇಮವನ್ನು ಎಷ್ಟು ಸರಳವಾಗಿ ಚಿತ್ರಿಸಿಕೊಡುತ್ತವೆ ಈ ಸಾಲುಗಳು.!!
“ಕಣ್ಣೀಗೆ ಕಪ್ಪಾಸೆ ಬಣ್ಣಕ್ಕೆ ಸೆರಗಾಸೆ
ಹೆಣ್ಣುಮಕ್ಕಳಿಗೆ ತವರಾಸೆ ತಾಯವ್ವ
ನಿಮ್ಮದೆ ನಮಗೆ ಅನುಗಾಲ.”
“ಕಲ್ಲಾಸೆ ಕಟ್ಟೀಗಿ ಮುಳ್ಳಾಸೆ ಬೇಲೀಗಿ
ಬಲ್ಲಿದರಾಸೆ ಬಡವರಿಗೆ ನನಕಂದಾ
ನಿನ್ನಾಸೆ ನನಗೆ ಅನುಗಾಲ.”
ತಾಯಿ-ಮಗಳ ಸಂಭಾಷಣೆಯ ಪರಿಯಿದು. ತಾಯಿಗೆ ಯಾವಾಗಲೂ ತನ್ನ ಮಗಳದೇ ನೆನಪು, ಮಗಳಿಗೂ ಕೂಡ ತನ್ನ ತಾಯಿಯನ್ನು ನೋಡುವ ಹಂಬಲ - ಯಾವಾಗಲೂ.
'ಆಕಳ ಕರು ಬಂದು ಅಂಬಾ ಅಂಬಾ ಎಂದು
ತಮ್ಮವ್ವನ ಮೊಲೆಯ ನಲಿನಲಿದು ಉಂಬಾಗ
ನಮ್ಮವ್ವನ ಧ್ಯಾನ ನನಗಾಗಿ'
ಈ ಸಾಲುಗಳು ಸರಳವಾಗಿದ್ದರೂ ಅದರಲ್ಲಿ ವ್ಯಕ್ತವಾಗಿರುವ ಭಾವ ತುಂಬ ಆಳವಾದದ್ದು. ಅದನ್ನು ಮಾತುಗಳಲ್ಲಿ ವಿವರಿಸಿ ಹೇಳುವುದು ಕಷ್ಟವೇ...
ಇಂತಹ ಸಾವಿರಾರು ಸುಂದರವಾದ ಹಾಡುಗಳು ನಮ್ಮ ಜನಪದ ಸಾಹಿತ್ಯದಲ್ಲಿವೆ ಎನ್ನುವುದು ನಿಜಕ್ಕೂ ಹೆಮ್ಮೆಯ ವಿಷಯ. ಈ ಗೀತೆಗಳ ಸೃಷ್ಟಿಕರ್ತರು ಯಾರೋ ತಿಳಿಯದಾದರೂ ಈ ಗೀತೆಗಳು ಇರುವವರೆಗೂ, ಕನ್ನಡ ಭಾಷೆಯಿರುವವರೆಗೂ ಅವರು ಪ್ರತಿ ಗೀತೆಯಲ್ಲಿಯೂ ಜೀವಂತವಿರುತ್ತಾರೆ ಎಂದು ನನ್ನ ಭಾವನೆ.
"ಹಾಲುಂಡ ತವರೀಗಿ ಏನೆಂದು ಹಾಡಲೆ
ಹೊಳೆದಂಡಿಯಲಿರುವ ಕರಕೀಯ ಕುಡಿಯಂಗ
ಹಬ್ಬಲೆ ಅವರ ರಸಬಳ್ಳಿ"
ತನ್ನ ತವರನ್ನು ಕುರಿತ ಹೆಣ್ಣೊಬ್ಬಳ ಹಾರೈಕೆಯಿದು. ಸಾಮಾನ್ಯವಾಗಿ, ಗರಿಕೆಯ ಹುಲ್ಲು ಯಾವಾಗಲೂ ಹಸಿರಾಗೇ ಇರುತ್ತದೆ(ನೀರಿನ ಅಭಾವದ ಕಾಲದಲ್ಲೂ). ಇಲ್ಲಿ ಈಕೆ, ತನ್ನ ತವರುಮನೆ 'ಹೊಳೆದಂಡಿಯಲ್ಲಿರುವ ಗರಿಕೆ'ಯ ಹಾಗೆ ಇರಲೆಂದು ಹಾರೈಸುತ್ತಿದ್ದಾಳೆ. ನಿತ್ಯವೂ ನೀರು ಹರಿಯುವ ಹೊಳೆಯ ದಡದಲ್ಲಿರುವ ಗರಿಕೆಯ ಹುಲ್ಲು ಎಂದೆಂದಿಗೂ ಹಸಿರಾಗೇ ಇರುತ್ತದೆಯಲ್ಲವೆ? ತನ್ನ ತವರುಮನೆಯ ಸಿರಿಯೂ ಹಾಗೆಯೇ ನಿತ್ಯ ಹಸಿರಾಗಿರಲೆಂದು ಆಕೆ ಹಾರೈಸುತ್ತಾಳೆ.
"ತವರೂರು ಹಾದೀಲಿ ಕಲ್ಲಿಲ್ಲ ಮುಳ್ಳಿಲ್ಲ
ಸಾಸಿವೆಯಷ್ಟು ಮರಳಿಲ್ಲ, ಬಾನಲ್ಲಿ
ಬಿಸಲೀನ ಬೇಗೆ ಸುಡಲಿಲ್ಲ"
ತನ್ನ ತವರನ್ನು ಕಾಣಲು ಹೊರಟಿರುವ ಹೆಣ್ಣುಮಗಳೊಬ್ಬಳ ಮಾತಿದು. ತವರಿಗೆ ಹೊರಟಿರುವ ಖುಷಿಯಲ್ಲಿ ಆಕೆಗೆ ಹಾದಿಯಲ್ಲಿ ಎದುರಾಗುವ ಕಷ್ಟಗಳ ಪರಿವೆಯೇ ಇಲ್ಲ. ಬಿಸಿಲಿನ ಬೇಗೆಯೂ ಆಕೆಯನ್ನು ಕಾಡಲಿಲ್ಲ.ಆಕೆಗೆ ತನ್ನ ತವರನ್ನು ಕಾಣುವ ಸಂತಸದಲ್ಲಿ ಮಾರ್ಗಮಧ್ಯದ ಈ ಯಾವ ಎಡರು-ತೊಡರುಗಳೂ ಲೆಕ್ಕಕ್ಕೆ ಬರಲಿಲ್ಲ. ಹೀಗಿದೆ ಆಕೆಯ ತವರಿನ ಪ್ರೇಮ.
"ತೊಟ್ಟೀಲ ಹೊತ್ಕೊಂಡು ತೌರ್ಬಣ್ಣ ಉಟ್ಕೊಂಡು
ಅಪ್ಪ ಕೊಟ್ಟೆಮ್ಮೆ ಹೊಡಕೊಂಡು ತೌರೂರ
ತಿಟ್ತತ್ತಿ ತಿರುಗಿ ನೋಡ್ಯಾಳೊ"
ತನ್ನ ಚೊಚ್ಚಲ ಬಾಣಂತನವನ್ನು ಮುಗಿಸಿಕೊಂಡು ತನ್ನ ಗಂಡನ ಮನೆಗೆ ಹೊರಟಿರುವ ಹೆಣ್ಣೊಬ್ಬಳ ಚಿತ್ರಣವನ್ನು ಕೊಡುತ್ತದೆ - ಈ ಗೀತೆ.
ತಾಯಿಯ ಮನೆಯವರು ಕೊಟ್ಟ ಸೀರೆಯನ್ನುಟ್ಟು, ಅಪ್ಪ ಕೊಟ್ಟ ಎಮ್ಮೆಯನ್ನು ಹೊಡಕೊಂಡು ಹೊರಟಿದ್ದಾಳೆ - ಒಂದು ದಿಬ್ಬದ ಮೇಲೆ. ಆ ದಿಬ್ಬದ ಮೇಲೆ ನಿಂತು ತನ್ನ ತವರುಮನೆಯ ಕಡೆಗೆ ಒಮ್ಮೆ ನೋಡುತ್ತಿದ್ದಾಳೆ.. ದಿಬ್ಬವನ್ನು ಇಳಿದುಬಿಟ್ಟರೆ ಮತ್ತೆ ತವರುಮನೆ ಕಾಣಿಸದು, ಅದಕ್ಕೇ ಮುಂದೆ ಹೊರಡುವ ಮುಂಚೆ ಇನ್ನೊಮ್ಮೆ ಎನ್ನುವಂತೆ ತವರನ್ನು ನೋಡುತ್ತಿದ್ದಾಳೆ ಆಕೆ. ಎಷ್ಟು ಸುಂದರವಾದ, ಮನಮುಟ್ಟುವ ನಿರೂಪಣೆ!
ಇನ್ನು, ಆಕೆಗೆ ತನ್ನ ತಾಯಿಯ ಬಗೆಗಿರುವ ಪ್ರೀತಿ, ಭಕ್ತಿ ಅಷ್ಟಿಷ್ಟಲ್ಲ,
"ತೌರು ಮನೆಯ ಜ್ಯೋತಿ ತಣ್ಣಾಗೆ ಉರಿಯವ್ವ
ತಣ್ಣೀರಾಗೆ ಮಿಂದು ಮಡಿಯುಟ್ಟು ಬರುತೀನಿ
ತಣ್ಣಾಗೆ ಉರಿಯೆ ಜಗಜೋತಿ"
ಇಲ್ಲಿ ಆಕೆ ತನ್ನ ತಾಯಿಯನ್ನು ತವರಿನ ಮನೆಯ ಜ್ಯೋತಿ ಎಂದು ಕರೆದಿರುವುದು ಎಷ್ಟು ಅರ್ಥಪೂರ್ಣವಾಗಿದೆ ಅಲ್ಲವೇ?
"ಕಾಶೀಗೆ ಹೋಗಲಿಕೆ ಏಸೊಂದು ದಿನ ಬೇಕು
ತಾಸ್ಸೊತ್ತಿನ ಹಾದಿ ತೌರೂರು ಮನೆಯಲ್ಲಿ
ಕಾಶಿ ಕುಂತವಳೆ ಹಡೆದವ್ವ"
"ಎಲ್ಲೋ ಇರುವ ಕಾಶಿಗೆ ಹೋಗಬೇಕೆಂದರೆ ಎಷ್ಟೋ ದಿನಗಳು ಬೇಕು. ಅಲ್ಲಿಗೆ ಹೋಗಲು ನನ್ನಿಂದ ಆಗುತ್ತದೋ ಇಲ್ಲವೋ, ಆದರೆ ತವರಿನ ಮನೆಯಂತೂ ಒಂದು ತಾಸು ಹೊತ್ತಿನ ಹಾದಿಯಷ್ಟೇ. ಅಲ್ಲಿಗೆ ಹೋದರೆ ಸಾಕು, ಅಲ್ಲಿ ನನ್ನ ತಾಯಿ ಇರುತ್ತಾಳೆ..." ಇಲ್ಲಿ ತನ್ನ ತಾಯಿಯನ್ನು ಕಾಶಿಯಂತಹ ಪುಣ್ಯಕ್ಷೇತ್ರಕ್ಕೆ ಹೋಲಿಸಿದ್ದಾಳೆ - ಈ ಹೆಣ್ಣುಮಗಳು, ಎಂತಹ ಉನ್ನತವಾದ ಕಲ್ಪನೆ.!
"ಯಾರು ಆದರೂ ಹೆತ್ತ ತಾಯಂತೆ ಆದಾರೋ
ಸಾವಿರ ಸೌದೆ ಒಲೆಯಲ್ಲಿ ಉರಿದಾರೂ
ದೀವಿಗೆಯಂತೆ ಬೆಳಕುಂಟೆ"
ಎಂತಹ ಅದ್ಭುತವಾದ ಹೋಲಿಕೆಯನ್ನು ಕೊಟ್ಟು ತಾಯಿಯ ಬಗೆಗೆ ಹೇಳುತ್ತಾಳೆ ಈ ಮಾತನ್ನು - "ಯಾವ ಬಂಧುಗಳು, ಆಪ್ತರೇ ಇದ್ದರೂ ಅವರಲ್ಲಿ ಯಾರೂ ಹೆತ್ತ ತಾಯಿಯನ್ನು ಸರಿಗಟ್ಟಲಾರರು. ತಾಯಿಗೆ ತಾಯಿಯೇ ಸಾಟಿ.
ಸಾವಿರ ಸೌದೆ ಉರಿಯಬಹುದು, ಅದು ಕೂಡ ಬೆಳಕು ಕೊಡುತ್ತದೆ. ಆದರೆ ಒಂದು ದೀಪವು ಕೊಡುವ ಸೌಮ್ಯವಾದ ಬೆಳಕಿಗೆ ಈ ಬೆಳಕು ಸರಿಹೋದೀತೆ?" ಇಲ್ಲ, ಖಂಡಿತ ಇಲ್ಲ. ಇಲ್ಲಿ, ಇನ್ನೊಂದು ರೀತಿಯಲ್ಲಿ ಅರ್ಥೈಸಬಹುದು. ದೀಪವು ಶುಭಸೂಚಕ. ಉರಿಯುವ ಸೌದೆಯಾದರೋ ಆಮಂಗಳವನ್ನು ಸೂಚಿಸುತ್ತದೆ.
"ಮೊಲೆಹಾಲ ಕುಡಿಸಿದ್ದಿ ಕಲಸಕ್ರಿ ತಿನಿಸಿದ್ದಿ
ಬೆಳದಿಂಗ್ಳಿಗು ಮರಿಯ ಹಿಡಿದಿದ್ದಿ ನಿನ ಸೆರಗ
ಅಳುವುದೀಗೆಷ್ಟು ಹಡೆದವ್ವ"
ಯಾವುದೋ ದುಃಖದ ಸಂದರ್ಭದಲ್ಲಿ ಹೇಳುತ್ತಿರುವ ಮಾತಿನಂತಿದೆ - ಈ ಗೀತೆ. ತಾಯಿಯ ಪ್ರೇಮದ ಪರಾಕಾಷ್ಟತೆಯನ್ನು ಈ ಸಾಲುಗಳು ಕಣ್ಣಿಗೆ ಕಟ್ಟಿಕೊಡುತ್ತವೆ.
"ಬೆಳದಿಂಗ್ಳಿಗು ಮರಿಯ ಹಿಡಿದಿದ್ದಿ ನಿನ ಸೆರಗ" -- ತಾಯಿಗೆ ತನ್ನ ಮಗುವಿನ ಮೇಲೆ ಅದೆಷ್ಟು ಪ್ರೀತಿ ಎಂದರೆ, ಬೆಳದಿಂಗಳ ಕಿರಣಗಳು ಸೋಕಿ ಎಲ್ಲಿ ತನ್ನ ಕಂದನ ಮೊಗವು ಕಂದುವುದೋ ಎಂದು ಆಕೆ ತನ್ನ ಸೆರಗನ್ನು ಮರೆಹಿಡಿಯುತ್ತಾಳೆ. ತನ್ನ ಮಗುವಿಗೆ ಅಷ್ಟು ಮಾತ್ರವೂ ನೋವಾಗಬಾರದೆಂದು ಆಕೆಯ ಕಾಳಜಿ. ಅಂತಹ ಅನನ್ಯ ಮಾತೃಪ್ರೇಮವನ್ನು ಎಷ್ಟು ಸರಳವಾಗಿ ಚಿತ್ರಿಸಿಕೊಡುತ್ತವೆ ಈ ಸಾಲುಗಳು.!!
“ಕಣ್ಣೀಗೆ ಕಪ್ಪಾಸೆ ಬಣ್ಣಕ್ಕೆ ಸೆರಗಾಸೆ
ಹೆಣ್ಣುಮಕ್ಕಳಿಗೆ ತವರಾಸೆ ತಾಯವ್ವ
ನಿಮ್ಮದೆ ನಮಗೆ ಅನುಗಾಲ.”
“ಕಲ್ಲಾಸೆ ಕಟ್ಟೀಗಿ ಮುಳ್ಳಾಸೆ ಬೇಲೀಗಿ
ಬಲ್ಲಿದರಾಸೆ ಬಡವರಿಗೆ ನನಕಂದಾ
ನಿನ್ನಾಸೆ ನನಗೆ ಅನುಗಾಲ.”
ತಾಯಿ-ಮಗಳ ಸಂಭಾಷಣೆಯ ಪರಿಯಿದು. ತಾಯಿಗೆ ಯಾವಾಗಲೂ ತನ್ನ ಮಗಳದೇ ನೆನಪು, ಮಗಳಿಗೂ ಕೂಡ ತನ್ನ ತಾಯಿಯನ್ನು ನೋಡುವ ಹಂಬಲ - ಯಾವಾಗಲೂ.
'ಆಕಳ ಕರು ಬಂದು ಅಂಬಾ ಅಂಬಾ ಎಂದು
ತಮ್ಮವ್ವನ ಮೊಲೆಯ ನಲಿನಲಿದು ಉಂಬಾಗ
ನಮ್ಮವ್ವನ ಧ್ಯಾನ ನನಗಾಗಿ'
ಈ ಸಾಲುಗಳು ಸರಳವಾಗಿದ್ದರೂ ಅದರಲ್ಲಿ ವ್ಯಕ್ತವಾಗಿರುವ ಭಾವ ತುಂಬ ಆಳವಾದದ್ದು. ಅದನ್ನು ಮಾತುಗಳಲ್ಲಿ ವಿವರಿಸಿ ಹೇಳುವುದು ಕಷ್ಟವೇ...
ಇಂತಹ ಸಾವಿರಾರು ಸುಂದರವಾದ ಹಾಡುಗಳು ನಮ್ಮ ಜನಪದ ಸಾಹಿತ್ಯದಲ್ಲಿವೆ ಎನ್ನುವುದು ನಿಜಕ್ಕೂ ಹೆಮ್ಮೆಯ ವಿಷಯ. ಈ ಗೀತೆಗಳ ಸೃಷ್ಟಿಕರ್ತರು ಯಾರೋ ತಿಳಿಯದಾದರೂ ಈ ಗೀತೆಗಳು ಇರುವವರೆಗೂ, ಕನ್ನಡ ಭಾಷೆಯಿರುವವರೆಗೂ ಅವರು ಪ್ರತಿ ಗೀತೆಯಲ್ಲಿಯೂ ಜೀವಂತವಿರುತ್ತಾರೆ ಎಂದು ನನ್ನ ಭಾವನೆ.
ಹೆಣ್ಣೀನ ಜನುಮಾಕೆ :
ಹೆಣ್ಣೀನ ಜನುಮಾಕೆ ಅಣ್ಣ ತಮ್ಮರು ಬೇಕು
ಬೆನ್ನು ಕಟ್ಟುವರು ಸಭೆಯೊಳಗೆ
ಬೆನ್ನು ಕಟ್ಟುವರು ಸಭೆಯೊಳಗೆ ಸಾವಿರ
ಹೊನ್ನು ಕಟ್ಟುವರು ಉಡಿಯೊಳಗೆ || ಪ ||
ಎನಗೆ ಯಾರಿಲ್ಲಂತ ಮನದಗ ಮರುಗಿದರು
ಪರನಾಡಲೊಬ್ಬ ಪ್ರತಿಸೂರ್ಯ | ನನ್ನಣ್ಣ
ಬಿದಿಗೆ ಚಂದ್ರಾಮ ಉದಿಯಾದ ||
ಮನೆಯ ಹಿಂದಲ ಮಾವು ನೆನೆದಾರೆ ಘಮ್ಮೆಂದು
ನೆನೆದಂಗೆ ಬಂದ ನನ ಅಣ್ಣ | ಬಾಳೆಯ
ಗೊನೆಯ್ಹಾಂಗೆ ತೋಳ ತಿರುವೂತ ||
ಸರದಾರ ಬರುವಾಗ ಸುರಿದಾವು ಮಲ್ಲಿಗೆ
ದೊರೆ ನನ್ನ ತಮ್ಮ ಬರುವಾಗ | ಯಾಲಕ್ಕಿ
ಗೊನೆ ಬಾಗಿ ಹಾಲ ಸುರಿದಾವೊ ||
ಅಣ್ಣಾ ಬರುತಾನಂತ ಅಂಗಳಕೆ ಕೈಕೊಟ್ಟು
ರನ್ನ ಬಚ್ಚಲಿಗೆ ಮಣೆ ಹಾಕಿ | ಕೇಳೇನು
ತಣ್ಣಗಿರಲಣ್ಣ ತವರವರು ||
*************************************************************************
ಕೂಸು ಇದ್ದ ಮನೆಗೆ ಬೀಸಣಿಕೆ ಯಾತಕ್ಕ|
ಕೂಸು ಕಂದಯ್ಯ ಒಳಹೊರಗ| ಆಡಿದರೆ|
ಬೀಸಣಿಕೆ ಗಾಳಿ ಸುಳಿದಾವು||
ಬ್ಯಾಸಗಿ ದಿವಸಕ ಬೇವಿನ ಮರತಂಪು|
ಭೀಮರತಿಯೆಂಪ ಹೊಳಿತಂಪು| ಹಡೆದವ್ವ |
ನೀತಂಪು ನನ್ನ ತವರೀಗೆ||
ಸಿರಿಬಂದ| ಕಾಲಕ್ಕೆ| ಕರೆದು ದಾ|ನವ ಮಾಡು|
ಪರಿಣಾಮ|ವಕ್ಕು| ಪದವಕ್ಕು| ಕೈಲಾಸ|
ನೆರೆಮನೆ|ಯಕ್ಕು| ಸರ್ವಜ್ಞ||
Thank You,,,,,
**************************************************************************************************************************
ಹೆಣ್ಣೀನ ಜನುಮಾಕೆ ಅಣ್ಣ ತಮ್ಮರು ಬೇಕು
ಬೆನ್ನು ಕಟ್ಟುವರು ಸಭೆಯೊಳಗೆ
ಬೆನ್ನು ಕಟ್ಟುವರು ಸಭೆಯೊಳಗೆ ಸಾವಿರ
ಹೊನ್ನು ಕಟ್ಟುವರು ಉಡಿಯೊಳಗೆ || ಪ ||
ಎನಗೆ ಯಾರಿಲ್ಲಂತ ಮನದಗ ಮರುಗಿದರು
ಪರನಾಡಲೊಬ್ಬ ಪ್ರತಿಸೂರ್ಯ | ನನ್ನಣ್ಣ
ಬಿದಿಗೆ ಚಂದ್ರಾಮ ಉದಿಯಾದ ||
ಮನೆಯ ಹಿಂದಲ ಮಾವು ನೆನೆದಾರೆ ಘಮ್ಮೆಂದು
ನೆನೆದಂಗೆ ಬಂದ ನನ ಅಣ್ಣ | ಬಾಳೆಯ
ಗೊನೆಯ್ಹಾಂಗೆ ತೋಳ ತಿರುವೂತ ||
ಸರದಾರ ಬರುವಾಗ ಸುರಿದಾವು ಮಲ್ಲಿಗೆ
ದೊರೆ ನನ್ನ ತಮ್ಮ ಬರುವಾಗ | ಯಾಲಕ್ಕಿ
ಗೊನೆ ಬಾಗಿ ಹಾಲ ಸುರಿದಾವೊ ||
ಅಣ್ಣಾ ಬರುತಾನಂತ ಅಂಗಳಕೆ ಕೈಕೊಟ್ಟು
ರನ್ನ ಬಚ್ಚಲಿಗೆ ಮಣೆ ಹಾಕಿ | ಕೇಳೇನು
ತಣ್ಣಗಿರಲಣ್ಣ ತವರವರು ||
*************************************************************************
ಕೂಸು ಇದ್ದ ಮನೆಗೆ ಬೀಸಣಿಕೆ ಯಾತಕ್ಕ|
ಕೂಸು ಕಂದಯ್ಯ ಒಳಹೊರಗ| ಆಡಿದರೆ|
ಬೀಸಣಿಕೆ ಗಾಳಿ ಸುಳಿದಾವು||
ಬ್ಯಾಸಗಿ ದಿವಸಕ ಬೇವಿನ ಮರತಂಪು|
ಭೀಮರತಿಯೆಂಪ ಹೊಳಿತಂಪು| ಹಡೆದವ್ವ |
ನೀತಂಪು ನನ್ನ ತವರೀಗೆ||
ಸಿರಿಬಂದ| ಕಾಲಕ್ಕೆ| ಕರೆದು ದಾ|ನವ ಮಾಡು|
ಪರಿಣಾಮ|ವಕ್ಕು| ಪದವಕ್ಕು| ಕೈಲಾಸ|
ನೆರೆಮನೆ|ಯಕ್ಕು| ಸರ್ವಜ್ಞ||
Thank You,,,,,
**************************************************************************************************************************
0 Comments